Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
11 | ಅನುಮಾನಮ್ | ಪ್ರತ್ಯಕ್ಷವಾದ ಗುರುತಿನಿಂದ ನಿಶ್ಚಯಿಸುವದು; ಇದನ್ನು ತರ್ಕವೆಂದೂ ಕರೆಯುವರು. ಆತ್ಮನನ್ನು ಕೇವಲ ಅನುಮಾನದಿಂದ ಅರಿಯುವದಕ್ಕೆ ಎಂದಿಗೂ ಆಗುವದಿಲ್ಲ. ಬ್ರಹ್ಮಸೂತ್ರಭಾಷ್ಯ. ೧-೧-೨, ೨-೧-೬, ಐತರೇಯ ಭಾಷ್ಯ. ೧ ನೆಯ. ಅಧ್ಯಾಯ ಭಾಷ್ಯದ ಉಪಸಂಹಾರ (ಭಾಷ್ಯ ಭಾಗ. ೬೩), ಬೃಹದಾರಣ್ಯಕೋಪನಿಷತ್ ಭಾಷ್ಯ. ೨-೧ರ ಉಪಸಂಹಾರ. | |||||||||
12 | ಅನ್ತಃಕರಣಮ್ | ಅದ್ವಿತೀಯಾತ್ಮನಿಗೆ ಅನೇಕತ್ವವನ್ನೂ ಸಂಸಾರಿತ್ವವನ್ನೂ ತೋರಿಸುವ ಉಪಾಧಿ. ಇದನ್ನು ಮನಸ್ಸು ಬುದ್ಧಿ, ವಿಜ್ಞಾನ, ಚಿತ್ರ- ಎಂದೂ ಕರೆಯುವರು. ವಿಷಯಗಳನ್ನು ಒಂದೊಂದಾಗಿ ಇಂದ್ರಿಯಗಳ ಮೂಲಕ ಅರಿಯುವ ಸಾಧನವಿದು. ಕಾಮ. ಸಂಕಲ್ಪ, ಸಂಶಯ, ಶ್ರದ್ಧೆ, ಜ್ಞಾನ, ಭಯ- ಮುಂತಾದವುಗಳೆಲ್ಲವೂ ಮನಸ್ಸಿನ ವೃತ್ತಿಗಳು. ಸಂಶಯಾದಿವೃತ್ತಿಯುಳ್ಳ ಅಂತಃಕರಣವನ್ನು ಮನಸ್ಸೆಂದೂ ನಿಶ್ಚಯಾದಿವೃತ್ತಿಯುಳ್ಳದ್ದನ್ನು ಬುದ್ಧಿಯೆಂದೂ ವಿಂಗಡಿಸಿ ಕರೆಯುವರು. ಬ್ರಹ್ಮಸೂತ್ರಭಾಷ್ಯ. ೨-೩-೩೨. | |||||||||
13 | ಅನ್ತ್ಯಂ ಪ್ರಮಾಣಮ್ | ಆತ್ಮನಲ್ಲಿ ತೋರುವ ಪ್ರಮಾತೃತ್ವವೆಂಬ ಅಧ್ಯಾಸವನ್ನು ತೆಗೆದುಹಾಕುವದರಿಂದ ಪ್ರಮಾಣಪ್ರಮೇಯವ್ಯವಹಾರವನ್ನೇ ಕೊನೆಗೊಳಿಸುವ, ಕೊನೆಯ ಪ್ರಮಾಣವಾದ, ಶಾಸ್ತ್ರ. ಭಗವದ್ಗೀತಾಭಾಷ್ಯ. ೨-೧೮, ೨-೬೯. ಅದ್ವಿತೀಯಾತ್ಮನನ್ನು ತಿಳಿಸುವದರಿಂದ ಈ ಪ್ರಮಾಣದಿಂದಾದ ಜ್ಞಾನವುಂಟಾದ ಬಳಿಕ ಏನು? ಏತರಿಂದ? ಹೇಗೆ?- ಎಂಬ ಆಕಾಂಕ್ಷೆಯುಂಟಾಗುವುದಿಲ್ಲ. ಬ್ರಹ್ಮಸೂತ್ರಭಾಷ್ಯ. ೨-೧-೧೪. | |||||||||
14 | ಅನ್ಯೋನ್ಯಾಧ್ಯಾಸಃ | ಆತ್ಮ, ಅನಾತ್ಮ-ಇವುಗಳಲ್ಲಿ ಒಂದನ್ನು ಒಂದರಲ್ಲಿಯೂ ಒಂದರ ಧರ್ಮಗಳನ್ನು ಇನ್ನೊಂದರಲ್ಲಿಯೂ ಅಧ್ಯಾಸಮಾಡುವದು. ಅಧ್ಯಾಸಭಾಷ್ಯ; ಭಗವದ್ಗೀತಾಭಾಷ್ಯ. ೧೩-೨೬. ಆತ್ಮನನ್ನು ಅನಾತ್ಮದಲ್ಲಿ ಅಧ್ಯಾಸಮಾಡುವಾಗ ಆತ್ಮನಿಗೆ ಸಂಸರ್ಗದ ಅಧ್ಯಾಸವೇ ಹೊರತು ಸ್ವರೂಪದ ಅಧ್ಯಾಸವಾಗುವದಿಲ್ಲ ಎಂದು ವ್ಯಾಖ್ಯಾನಕಾರರು ಬರೆಯುತ್ತಾರೆ. ಆದರೆ ಇದಕ್ಕೆ ಭಾಷ್ಯದ ಆಧಾರವು ಕಾಣುವದಿಲ್ಲ. | |||||||||
15 | ಅನ್ವೇಷಣಮ್ | ಆತ್ಮನನ್ನು ಹುಡುಕುವದು; ಶಾಸ್ತ್ರಾಚಾರ್ಯರ ಉಪದೇಶದಿಂದ ಆತ್ಮನನ್ನು ಪರೋಕ್ಷವಾಗಿ ಅರಿತುಕೊಳ್ಳುವದು. ಛಾಂದೋಗ್ಯೋಪನಿಷತ್ದೋಗ್ಯೋಪನಿಷತ್ ಭಾಷ್ಯ. ೮-೧-೧, ೮-೭-೧. ಆತ್ಮನು ನಮ್ಮೆಲ್ಲರ ಸ್ವರೂಪವೇ ಆಗಿದ್ದರೂ ತತ್ವವನ್ನು ತಿಳಿದುಕೊಳ್ಳದಿರುವ ನಿಮಿತ್ತದಿಂದ ದೇಹಾದಿಗಳೇ ನಾವೆಂಬ ತಪ್ಪು ತಿಳಿವಳಿಕೆಯುಂಟಾಗುತ್ತದೆ. ಹೀಗೆ ದೇಹಾದಿಗಳೇ ತಾನೆಂಬ ತಿಳಿವಳಿಕೆಯುಳ್ಳವರಿಗೆ ಆತ್ಮನು ಅನ್ವೇಷ್ಟವ್ಯನಾಗುತ್ತಾನೆ, ಶಾಸ್ತ್ರಾಚಾರ್ಯರ ಉಪದೇಶದಿಂದ ಅರಿತುಕೊಳ್ಳಬೇಕಾದವನಾಗುತ್ತಾನೆ. ಬ್ರಹ್ಮಸೂತ್ರಭಾಷ್ಯ. ೧-೧-೧೭. | |||||||||
16 | ಅಪರಂ ಬ್ರಹ್ಮ | ಕಡಿಮೆಯ ಬ್ರಹ್ಮ. ಅವಿದ್ಯಾಕೃತವಾದ ನಾಮರೂಪಾದಿಗಳಿಂದ ಕೂಡಿರುವ ಉಪಾಸ್ಯಬ್ರಹ್ಮವು ಅಪರಬ್ರಹ್ಮವು. ಇದನ್ನು ಕಾರ್ಯಬ್ರಹ್ಮ, ಸಗುಣಬ್ರಹ್ಮ, ಸೋಪಾಧಿಕಬ್ರಹ್ಮ- ಎಂದೂ ಕರೆಯುವರು. ಬ್ರಹ್ಮಸೂತ್ರಭಾಷ್ಯ. ೪-೩-೭, ೪-೩-೧೪. ಪರಬ್ರಹ್ಮವನ್ನೇ ಮನೋಮಯತ್ವಾದಿಗಳಿಂದ ಕೂಡಿರುವದೆಂದು ಉಪಾಸನೆಗಾಗಿ ಉಪದೇಶಿಸಿರುತ್ತದೆ, ಇದಕ್ಕೆ ಅಪರಬ್ರಹ್ಮವೆಂದು ಹೆಸರು. ಬ್ರಹ್ಮಸೂತ್ರಭಾಷ್ಯ. ೪-೩-೯. | |||||||||
17 | ಅಪೌರುಷೇಯಮ್ | ಭಾರತವೇ ಮುಂತಾದ ಗ್ರಂಥದಂತೆ ಸ್ವತಂತ್ರನಾದ ಕರ್ತೃವು ಮಾಡಿದ್ದೆಂದು ಯಾವ ಸ್ಮೃತಿಯಲ್ಲಿಯೂ ಹೇಳಿಲ್ಲವಾದ್ದರಿಂದಲೂ ಶಬ್ದಾರ್ಥಸಂಬಂಧವು ನಿತ್ಯವಾಗಿರುವದರಿಂದಲೂ ವೇದವು ಯಾವ ಪುರುಷನೂ ಮಾಡಿದ್ದಲ್ಲವೆಂದು ಪೂರ್ವಮೀಮಾಂಸಕರು ಹೇಳುತ್ತಾರೆ. ಇದನ್ನು ಉತ್ತರ ಮೀಮಾಂಸದಲ್ಲಿಯೂ ಒಪ್ಪಿರುತ್ತದೆ. (ಬ್ರಹ್ಮಸೂತ್ರಭಾಷ್ಯ. ೧-೨-೨,೧-೩-೨೯). ಆದರೆ ವೇದವು ಮನುಷ್ಯನ ನಿಃಶ್ವಾಸದಂತೆ ಲೀಲಾನ್ಯಾಯದಿಂದ ಬ್ರಹ್ಮದಿಂದ ಉಂಟಾಗಿರುವದೆಂದೂ ಬ್ರಹ್ಮಸೂತ್ರಭಾಷ್ಯ. ೧-೧-೩, ಪರಮಾರ್ಥವಾಗಿ ಇದು ಆತ್ಮಸ್ವರೂಪವಾಗಿಯೇ ಸತ್ಯವಾಗಿರುವದೆಂದೂ (ತೈತ್ತಿರೀಯೋಪನಿಷತ್ ಭಾಷ್ಯ. ೨-೩, ಭಾಷ್ಯ ಭಾಗ. ೧೩೩), ತನ್ನ ರೂಪದಿಂದ ಅದೂ ಅನೃತವೇ ಎಂದೂ (ಬ್ರಹ್ಮಸೂತ್ರ ಭಾಷ್ಯ. ೪-೧೩) ಆಚಾರ್ಯರು ಅಭಿಪ್ರಾಯಪಟ್ಟಿರುತ್ತಾರೆ. | |||||||||
18 | ಅಭಿಧಾನಮ್ | ವಸ್ತುವನ್ನು ಹೇಳುವ ಶಬ್ದ. ಇದನ್ನು ವಾಚಕವೆಂದೂ ಕರೆಯುವರು. ಬ್ರಹ್ಮವು ಯಾವ ಅಭಿಧಾನದಿಂದಲೂ ಹೇಳಲ್ಪಡುವ ವಸ್ತುವಲ್ಲ, ಅಭಿಧೇಯವಲ್ಲ. ಅದರ ಸ್ವರೂಪವು ಅಭಿಧಾನ, ಅಭಿಧೇಯ- ಈ ಎರಡಕ್ಕಿಂತಲೂ ಬೇರೆಯಾಗಿದೆ. ನಾಮ, ಜಾತಿ- ಮುಂತಾದ ವಿಕಲ್ಪಗಳಿರುವ ವಸ್ತು ಮಾತ್ರ ಅಭಿಧಾನಕ್ಕೆ ವಿಷಯವಾಗಿ ಅಭಿಧೇಯವಾಗಿರುವದು. ಮಾಂಡೂಕ್ಯಕಾರಿಕಾಭಾಷ್ಯ. ೧; ಮಾಂಡೂಕ್ಯಕಾರಿಕಾಭಾಷ್ಯ ಭಾಗ. ೩೫; ತೈತ್ತಿರೀಯೋಪನಿಷತ್ ಭಾಷ್ಯ ೨-೯ ಭಾಷ್ಯ ಭಾಗ. ೨೨೦. | |||||||||
19 | ಅರ್ಥವಾದಃ | ಮುಖ್ಯೋಪದೇಶವನ್ನು ಹೊಗಳುವ, ಅಥವಾ ಅದಕ್ಕೆ ವಿಪರೀತವಾದದ್ದನ್ನು ನಿಂದಿಸುವ ವಾಕ್ಯ. ಕರ್ಮವನ್ನು ವಿಧಿಸುವದೇ ಶಾಸ್ತ್ರದ ಮುಖ್ಯೋದ್ದೇಶವೆಂದು ಪೂರ್ವಮೀಮಾಂಸಕರೆನ್ನುತ್ತಿದ್ದರು. ಅವರ ಅಭಿಪ್ರಾಯದಲ್ಲಿ ಉಪನಿಷತ್ತುಗಳು ಕೂಡ ಕರ್ಮಕ್ಕೆ ಬೇಕಾದ ಕರ್ತೃವನ್ನು ಅಥವಾ ದೇವತೆಯನ್ನು ತಿಳಿಸುವದರಿಂದ ಪ್ರಮಾದವಾಗಬಹುದು; ಅಥವಾ ವಿಧಿಯನ್ನು ಹೊಗಳುವ ಅರ್ಥವಾದವಾಗಬೇಕು. ಆದರೆ ಉಪನಿಷತ್ತುಗಳಲ್ಲಿರುವ ವಾಕ್ಯಗಳು ತಾತ್ಪರ್ಯದಿಂದ ಬ್ರಹ್ಮವನ್ನೇ ಹೇಳುತ್ತವೆ; ಮುಖ್ಯವಾದ ವಾಕ್ಯಗಳಲ್ಲಿರುವ ಪದಗಳು ಬ್ರಹ್ಮಸ್ವರೂಪವನ್ನು ತಿಳಿಸುವ ಸಮನ್ವಯವುಳ್ಳವಾಗಿರುವದರಿಂದ ಉಪನಿಷತ್ತುಗಳು ನೇರಾಗಿ ಬ್ರಹ್ಮವನ್ನು ತಿಳಿಸುವ ಪ್ರಮಾಣಗಳಾಗಿವೆ-ಎಂದು ಆಚಾರ್ಯರು ಪ್ರತಿಪಾದಿಸಿರುತ್ತಾರೆ. ಬ್ರಹ್ಮಸೂತ್ರ ಭಾಷ್ಯ. ೧-೧-೪, ಬೃಹದಾರಣ್ಯಕೋಪನಿಷತ್ ಭಾಷ್ಯ. ೧-೪-೧೦ ಐತರೇಯ ಭಾಷ್ಯ, ಸಂಬಂಧಗ್ರಂಥ. ಅರ್ಥವಾದಗಳಲ್ಲಿರುವ ಅಭಿಪ್ರಾಯವು ಪ್ರಮಾಣಾಂತರಕ್ಕೆ ವಿಷಯವಾಗಿದ್ದರೆ ಅದು ಅನುವಾದವು, ಎಂದರೆ ತಿಳಿದದ್ದನ್ನೇ ತಿಳಿಸತಕ್ಕದ್ದಾದ್ದರಿಂದ ಅದು ಪ್ರಮಾಣವಲ್ಲ. ಎಲ್ಲಿ ಪ್ರಮಾಣಾಂತರಕ್ಕೆ ವಿರುದ್ಧವಾಗಿರುತ್ತದೆಯೋ ಅಲ್ಲಿ ಗುಣವಾದವು, ಎಂದರೆ ಆಯಾ ಗುಣವನ್ನು ಮಾತ್ರ ತಿಳಿಸುವದು. ಆದರೆ ಎಲ್ಲಿ ಈ ಎರಡು ಪ್ರಕಾರಗಳೂ ಹೊಂದುವದಿಲ್ಲವೋ ಅಲ್ಲಿ ಭೂತಾರ್ಥವಾದವೇ, ಎಂದರೆ ಇದ್ದದ್ದನ್ನೇ ತಿಳಿಸುವದು- ಎಂದು ಇಟ್ಟುಕೊಳ್ಳಬೇಕು ಎಂಬುದು ಆಚಾರ್ಯರ ಮತವು. ಬ್ರಹ್ಮಸೂತ್ರ ಭಾಷ್ಯ. ೧-೩-೩೩. | |||||||||
20 | ಅವಸ್ಥಾ | ಜಾಗರಿತ, ಜಾಗ್ರತ್ (ಎಚ್ಚರ); ಸ್ವಪ್ನ (ಕನಸು), ಸುಷುಪ್ತಿ, ಸುಷುಪ್ತ (ತನಿನಿದ್ರೆ) ಎಂಬ ಮೂರೂ ಜೀವನ ಅವಸ್ಥೆಗಳು. ಈ ಮೂರು ಅವಸ್ಥೆಗಳಲ್ಲಿಯೇ ವಾದಿಗಳು ಕಲ್ಪಿಸಿರುವ ವಸ್ತುಗಳೆಲ್ಲ ಅಡಕವಾಗಿರುವವು; ಇವುಗಳ ತತ್ತ್ವವನ್ನು ಅರಿತುಕೊಂಡರೆ ಎಲ್ಲವನ್ನೂ ಅರಿತುಕೊಂಡಂತೆ. ಮಾಂಡೂಕ್ಯಕಾರಿಕಾಭಾಷ್ಯ. ೪-೮೮. ಅವಸ್ಥೆಗಳಲ್ಲಿ ಕಾಣುವ ಆಧ್ಯಾತ್ಮಿಕ, ಆಧಿಭೌತಿಕ, ಆಧಿದೈವಿಕ ದೃಷ್ಯಗಳೆಲ್ಲವೂ ಆಯಾ ಅವಸ್ಥೆಗೇ ಸೇರಿದ್ದು ಎಂದು ತಿಳಿಯಬೇಕು. ಮಾಂಡೂಕ್ಯಕಾರಿಕಾಭಾಷ್ಯ. ೩. |