Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
61 | ಉಪನಿಷತ್-೨ | ಯಾರು ಇದರ ಬಳಿಗೆ ಬಂದು (ಉಪ), ನಿಶ್ಚಯದಿಂದ ಇದನ್ನು ಪರಿಶೀಲಿಸುವರೋ ಅವರ ಅವಿದ್ಯಾದಿಗಳನ್ನು ನಾಶಮಾಡುವದರಿಂದ ಇದು ಉಪನಿಷತ್ ಎನಿಸುವದು. ಕಠೋಪನಿಷತ್ ಭಾಷ್ಯ. ಮತ್ತು ಮುಂಡಕೋಪನಿಷತ್ ಭಾಷ್ಯ. ಗಳ ಅವತರಣಿಕೆಯನ್ನು ನೋಡಿ. ಈ ವಿದ್ಯೆಯನ್ನು ಹೇಳುವ ಗ್ರಂಥವನ್ನೂ ಉಪನಿಷತ್ತೆಂದು ಕರೆಯುವದು ಉಪಚಾರಕ್ಕೆ. | |||||||||
62 | ಉಪನಿಷತ್-೩ | ಅಭಿಧಾಯಕವಾದ ಶಬ್ದವು. ಬೃಹದಾರಣ್ಯಕೋಪನಿಷತ್ ಭಾಷ್ಯ. ೨-೧-೨೦. | |||||||||
63 | ಉಪಾದಾನಕಾರಣಮ್ | ಯಾವುದನ್ನು ತೆಗೆದುಕೊಂಡರೇ ಕಾರ್ಯವಾಗುವದೋ ಅದು; ಮಣ್ಣು, ಸುವರ್ಣ- ಮುಂತಾದವುಗಳು ಮಡಕೆ, ಒಡವೆಗಳು - ಇವುಗಳಿಗೆ ಉಪಾದಾನಕಾರಣವು. ಬ್ರಹ್ಮಸೂತ್ರ ಭಾಷ್ಯ. ೧-೪-೨೩, ೨-೧-೧, ಇಲ್ಲದಿರುವ ಮಡಕೆ, ಒಡವೆ-ಮುಂತಾದವು ಹೊಸದಾಗಿ ಹುಟ್ಟಿ ಕಾರಣದೊಡನೆ ಸಮವಾಯಸಂಬಂಧದಿಂದ ಸೇರಿಕೊಳ್ಳುವವೆಂದೂ ಮಣ್ಣು ಮುಂತಾದವು ಸಮವಾಯಿ ಕಾರಣಗಳೆಂದೂ ಹೇಳುವ ವೈಶೇಷಿಕರ ಮತವನ್ನು ಆಚಾರ್ಯರು ಖಂಡಿಸಿರುತ್ತಾರೆ! ಬ್ರಹ್ಮಸೂತ್ರ ಭಾಷ್ಯ. ೨-೧-೧೮; ಭಗವದ್ಗೀತಾಭಾಷ್ಯ. ೧೮-೪೮. | |||||||||
64 | ಉಪಾಧಿ | ಹತ್ತಿರವಿರುವದರಿಂದ ತನ್ನ ಸ್ವಭಾವವನ್ನು ಮತ್ತೊಂದರಲ್ಲಿ ತೋರಿಸುವ ಪದಾರ್ಥ. ಜೀವಾತ್ಮನಿಗೆ ದೇಹ, ಇಂದ್ರಿಯಗಳ ಪ್ರಾಣ, ಮನಸ್ಸು- ಇವು ಉಪಾಧಿಗಳು. ಬ್ರಹ್ಮಸೂತ್ರ ಭಾಷ್ಯ. ೧-೧-೫, ೧-೧-೧೭, ೧-೧-೩೧, ೧-೩-೧೯. ಈ ಉಪಾಧಿಗಳು ಅವಿದ್ಯೆಯಿಂದ ಕಲ್ಪಿತವಾಗಿರುತ್ತವೆ, ಪರಮಾರ್ಥವಲ್ಲ, ಬ್ರಹ್ಮಸೂತ್ರ ಭಾಷ್ಯ. ೩-೨-೧೫. | |||||||||
65 | ಉಪಾಧ್ಯುಪಶಮ | ಸುಷುಪ್ತಿ ಮುಂತಾದ ಅವಸ್ಥೆಗಳಲ್ಲಿ ಉಪಾಧಿಗಳು ಇಲ್ಲವಾಗುವದು. ಆಗ ಜೀವಾತ್ಮನಿಗೆ ಪರಮಾತ್ಮನೊಡನೆ ಸ್ವರೂಪಸಂಬಂಧವಾಗುವದು. ಬ್ರಹ್ಮಸೂತ್ರ ಭಾಷ್ಯ. ೩-೨-೮, ೩-೨-೩೪, ೩೫. | |||||||||
66 | ಉಪಾಸನಮ್, ಉಪಾಸನಾ | ಒಂದಾನೊಂದು ವಸ್ತುವನ್ನು ಶಾಸ್ತ್ರದಲ್ಲಿ ಹೇಳಿರುವಂತೆ, ಮತ್ತೊಂದು ವಸ್ತುವಿನ ಚಿಂತೆಯು ನಡುವೆ ಬರದಂತೆ, ಅದನ್ನೇ ಎಡೆಬಿಡದೆ ಚಿಂತಿಸುತ್ತಿರುವದು. ತೈತ್ತಿರೀಯೋಪನಿಷತ್ ಭಾಷ್ಯ. ೧-೩, ಬ್ರಹ್ಮಸೂತ್ರ ಭಾಷ್ಯ. ೪-೧-೧; -ಭಗವದ್ಗೀತಾಭಾಷ್ಯ. ೧೨-೩. ಈ ಉಪಾಸನೆಯು ಭಾವನಾರೂಪವಾಗಿಯೂ ಜ್ಞಾನರೂಪವಾಗಿಯೂ ಇರಬಹುದು. ಭಗವದ್ಗೀತಾಭಾಷ್ಯ. ೧೨-೩, ಬೃಹದಾರಣ್ಯಕ್ಯೋಪನಿಷತ್ ಭಾಷ್ಯ. ೧-೪-೭, ಭಾವನಾರೂಪವಾದ ಉಪಾಸನೆಗಳಿಗೆ ಪ್ರಾಣಾದಿಗಳೂ ಸಗುಣಬ್ರಹ್ಮವೂ ವಿಷಯವಾಗಿರುವವು. ಅವುಗಳಿಗೆ ದೃಷ್ಟಫಲವೂ ಅದೃಷ್ಟಫಲವೂ ಉಂಟು. ಕೆಲವಕ್ಕೆ ಜ್ಞಾನೋತ್ಪತ್ತಿ ಮೂಲಕವಾಗಿ ಮುಕ್ತಿಯು ಆಗುವದು. ಬ್ರಹ್ಮಸೂತ್ರ ಭಾಷ್ಯ. ೩-೩-೧, ಭಗವದ್ಗೀತಾಭಾಷ್ಯ. ೮-೧೨, ಪ್ರಶ್ನೋಪನಿಷತ್ ಭಾಷ್ಯ ೫-೧. ಉಪಾಸ್ಯೋಪಾಸಕವ್ಯವಹಾರವೆಲ್ಲ ಅವಿದ್ಯಾವಿಷಯವೇ. ಬ್ರಹ್ಮಸೂತ್ರ ಭಾಷ್ಯ. ೧-೧-೪. | |||||||||
67 | ಋಣತ್ರಯಮ್ | ದೇವಋಣ, ಋಷಋಣ, ಪಿತೃಋಣ - ಎಂಬ ಮೂರನ್ನು ತೀರಿಸಿದ ಬಳಿಕವೇ ಮೋಕ್ಷದಲ್ಲಿ ಮನಸ್ಸಿಡಬೇಕೆಂದು ಶ್ರುತಿಸ್ಮೃತಿಗಳಲ್ಲಿದೆ. ಇದು ಅವಿರಕ್ತರಾದ ಆಜ್ಞರ ವಿಷಯವೆಂಬ ಆಚಾರ್ಯರ ಅಭಿಪ್ರಾಯ. ಐತರೇಯ ಭಾಷ್ಯ. ೨೦, ಬೃಹದಾರಣ್ಯಕೋಪನಿಷತ್. ೧-೪-೧೦, ೪-೫-೧೫. | |||||||||
68 | ಋಷಿ | ಬಲ್ಲವನು, ತತ್ತ್ವವನ್ನು ಅರಿತಿರುವವನು. ಈ ಮಾತನ್ನು ವೇದ, ಕರ್ಮತತ್ತ್ವವನ್ನು ಬಲ್ಲವನು, ಉಪಾಸನಾತತ್ತ್ವವನ್ನು ಬಲ್ಲವನು, ಪರಮಾರ್ಥ ತತ್ತ್ವವನ್ನು ಬಲ್ಲವನು- ಎಂಬರ್ಥದಲ್ಲಿ ಆಚಾರ್ಯರು ಉಪಯೋಗಿಸಿರುತ್ತಾರೆ. ಐತರೇಯ ಭಾಷ್ಯ. ೨-೫, ಪ್ರಶ್ನೋಪನಿಷತ್ ಭಾಷ್ಯ ೧-೯, ಮುಂಡಕೋಪನಿಷತ್ ಭಾಷ್ಯ. ೩-೬. | |||||||||
69 | ಏಕಮ್ | ಬೇರೆಯಲ್ಲದೆ ಎಲ್ಲೆಲ್ಲಿಯೂ ಒಂದೇ ಆಗಿರುವ, ತನಗೆರಡನೆಯದಿಲ್ಲದ. ಆತ್ಮನು ಏಕನು ಎಂದರೆ ಎಲ್ಲರಿಗೂ ಒಬ್ಬನೇ ಎಂದರ್ಥ; ಅಥವಾ ತನಗಿಂತ ಬೇರೆಯಾದ ಎರಡನೆಯದಿಲ್ಲವನು ಎಂದರ್ಥ. ಏಕವೆಂಬ ಮಾತನ್ನು ಸಂಖ್ಯಾವಾಚಕವಾಗಿ ಉಪಯೋಗಿಸಿಲ್ಲ. ಈಶಾವಾಸ್ಯೋಪನಿಷತ್ ಭಾಷ್ಯ. ೪, ಛಾಂದೋಗ್ಯೋಪನಿಷತ್ದೋಗ್ಯೋಪನಿಷತ್ ಭಾಷ್ಯ. ೬-೨-೧. | |||||||||
70 | ಐಕಾಶ್ರಮ್ಯ | ಗಾರ್ಹಸ್ಥ್ಯವೆಂಬ ಒಂದು ಆಶ್ರಮವೇ ಶ್ರುತಿಗೆ ಇಷ್ಟವಾದದ್ದೆಂಬ ವಾದವನ್ನು ಆಚಾರ್ಯರು ಖಂಡಿಸಿರುತ್ತಾರೆ. ತೈತ್ತಿರೀಯೋಪನಿಷತ್ ಭಾಷ್ಯ. ೧-೧೧ ಉಪಸಂಹಾರ; ಬೃಹದಾರಣ್ಯಕೋಪನಿಷತ್ ಭಾಷ್ಯ. ೪-೫-೧೫ ಉಪಸಂಹಾರ. |