Severity: Notice
Message: Trying to access array offset on value of type null
Filename: controllers/Dictionary.php
Line Number: 318
Backtrace:
File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 319
Backtrace:
File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler
File: /Appdata/padakanaja.karnataka.gov.in/index.php
Line: 318
Function: require_once
Severity: Notice
Message: Trying to access array offset on value of type null
Filename: controllers/Dictionary.php
Line Number: 320
Backtrace:
File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler
File: /Appdata/padakanaja.karnataka.gov.in/index.php
Line: 318
Function: require_once
ಕ್ರಮ ಸ೦ಖ್ಯೆ | ಇಂಗ್ಲೀಷ್ ಪದ (English Word) |
ಕನ್ನಡ ಪದ (Kannada Word) |
ಕನ್ನಡ ಅರ್ಥ (Kannada Meaning) |
ವಿಷಯ ವರ್ಗೀಕರಣ (Word Subject) |
ವ್ಯಾಕರಣ ವಿಶೇಷ (Word Grammer) |
ಕನ್ನಡ ಉಚ್ಚಾರಣೆ (Kannada Pronunciation) |
ಪರ್ಯಾಯ ಪದ (Word Synonyms) |
ಇಂಗ್ಲೀಷ್ ಅರ್ಥ (English Meaning) |
ಸಂಕ್ಷಿಪ್ತ ವಿವರಣೆ (Short Description) |
ದೀರ್ಘ ವಿವರಣೆ (Long Description) |
ಆಡಳಿತಾತ್ಮಕ ಪದ (Administrative Word) |
---|---|---|---|---|---|---|---|---|---|---|---|
21 | ಅವಾಕ್ಯಾರ್ಥಃ, ಅವಾಚ್ಯಾರ್ಥಃ | ಬ್ರಹ್ಮದಲ್ಲಿ ಶಬ್ದಪ್ಪವೃತ್ತಿಗೆ ನಿಮಿತ್ತವಾದ ಜಾತಿ, ದ್ರವ್ಯ- ಮುಂತಾದ ವಿಕಲ್ಪಗಳಿಲ್ಲದ್ದರಿಂದ ಅದು ಯಾವ ಶಬ್ದಕ್ಕೂ ವಾಚ್ಯವಲ್ಲ. ಪದಾರ್ಥಗಳ ಸಂಸರ್ಗವನ್ನೇ ವಾಕ್ಯವು ತಿಳಿಸುವದರಿಂದ ಯಾವದರ ಸಂಬಂಧವೂ ಇಲ್ಲದ ಬ್ರಹ್ಮವು ವಾಕ್ಯಾರ್ಥವೂ ಅಲ್ಲ. ತೈತ್ತಿರೀಯೋಪನಿಷತ್ ಭಾಷ್ಯ. ೨-೧. "ಅಭಿಧಾನಮ್' ಎಂಬ ಶಬ್ದದ ವಿವರವನ್ನು ನೋಡಿ. | |||||||||
22 | ಅವಿದ್ಯಾ | ಆತ್ಮಾನಾತ್ಮರ ಅನ್ಯೋನ್ಯಾಧ್ಯಾಸವೇ ಅವಿದ್ಯೆ. ಈ ಅಧ್ಯಾಸವು ಕಾರ್ಯಾವಿದ್ಯೆಯೆಂದೂ ಇದಕ್ಕೆ ಕಾರಣವಾಗಿ ಮೂಲಾವಿದ್ಯೆ, ಮಾಯೆ- ಎಂಬ ಹೆಸರಿನ ಅವಿದ್ಯೆಯೊಂದು ಇರುವದೆಂದೂ ವ್ಯಾಖ್ಯಾನಕಾರರು ಬದೆದಿರುತ್ತಾರೆ. ಪ್ರಸ್ತಾನತ್ರಯಭಾಷ್ಯದಲ್ಲಿ ಈ ವಾದಕ್ಕೆ ಆಧಾರವು ಸಿಕ್ಕುವದಿಲ್ಲ. | |||||||||
23 | ಅವಿದ್ಯಾಕಲ್ಪಿತ | ಅವಿದ್ಯೆಯಿಂದ ತೋರುವ; ಭ್ರಾಂತಿನಿಮಿತ್ತವಾದ ಹುಸಿ ತೋರಿಕೆ. ಅವಿದ್ಯಾಕಲ್ಪಿತ, ಅವಿದ್ಯಾಕೃತ, ಅವಿದ್ಯಾತ್ಮಕ, ಅವಿದ್ಯಾನಿಮಿತ್ತ, ಅವಿದ್ಯಾ ಪ್ರತ್ಯುಪಸ್ಥಾಪಿತ, ಅವಿದ್ಯಾಧ್ಯಾರೋಪಿತ, ಅವಿದ್ಯಾಧ್ಯಸ್ತ, ಅವಿದ್ಯಾಲಕ್ಷಣ- ಈ ಎಲ್ಲಾ ಮಾತುಗಳಿಗೂ ಒಂದೇ ಅರ್ಥ. ಸೂತ್ರ ಭಾಷ್ಯದಲ್ಲಿ ಈ ಮುಂದೆ ಹೇಳುವದೆಲ್ಲವೂ ಅವಿದ್ಯಾಕಲ್ಪಿತವೆಂದು ತಿಳಿಸಿದೆ; ಉಪಾಸ್ಯೋಪಾಸಕ ಭಾವ ೧-೧-೧೨; ಆತ್ಮಬುದ್ಧಿ ಸಂಬಂಧ ೨-೩-೩೧; ಕರ್ತೃತ್ವಭೋಕ್ತತ್ವಗಳು ೨-೩. ೪೦; ಸಂಸಾರಿತ್ವ, ಜೀವತ್ವ, ಶಾರೀರತ್ವ ೧-೧-೪, ೧-೧-೧೭, ೧-೩-೧೯, ೨-೩-೪೬, ೨-೩-೫೦; ಕಾರ್ಯಕರಣಗಳು ೧-೧-೨೦; ತಪ್ಯತಾಪಕಭಾವ ೨-೨-೧೦; ನಾಮರೂಪಬೀಜ, ನಾಮರೂಪಮಾಯಾ ೧-೪-೩, ೨-೧-೧೪, ೨-೨-೨ ೪-೩-೧೪; ಜೀವಪ್ರಾಜ್ಞಭೇದ ೧-೪-೬; ನಾಮರೂಪರಚಿತದೇಹಾದ್ಯುಪಾಧಿಗಳು ೧-೪-೨೨, ೨-೩-೪೬; ಪ್ರಾಣಾದಿಕಲೆಗಳು ೪-೨-೧೬; ಬ್ರಹ್ಮದ ಉಪಾಧಿಗಳು ೨-೩-೧೫; ಬ್ರಹ್ಮದ ಕಾರ್ಯವಾದ ಪ್ರಪಂಚವೂ ಅದರ ಧರ್ಮಗಳೂ ೨-೧-೯; ಭೂತೇಂದ್ರಿಯಗಳು ೧-೪. ೨೨; ವ್ಯಾಕೃತಾವ್ಯಾಕೃತನಾಮರೂಪಗಳು ೨-೧-೨೭. | |||||||||
24 | ಅವ್ಯಕ್ತಃ | ಇಂದ್ರಿಯಗಳಿಗೆ ಗೋಚರನಲ್ಲದ ಆತ್ಮ. ಭಗವದ್ಗೀತಾ ಭಾಷ್ಯ. ೮-೨೦. | |||||||||
25 | ಅವ್ಯಕ್ತಮ್ | ನಾಮರೂಪಾತ್ಮಕವಾದ ಜಗತ್ತಿನ ಬೀಜವಾದ ಅವ್ಯಾಕೃತ ಅಥವಾ ಮಾಯೆ. ಇದು ಸಾಂಖ್ಯರು ಕಲ್ಪಿಸಿರುವ ಪ್ರಧಾನದಂತೆ ಸ್ವತಂತ್ರವಾಗಿ ಪರಿಣಾಮವಾಗುವದಲ್ಲ; ಅವಿದ್ಯೆಯಿಂದ ಆತ್ಮನಲ್ಲಿ ಶಕ್ತಿಯೆಂದು ಕಲ್ಪಿತವಾಗಿರುವದು. ಬ್ರಹ್ಮಸೂತ್ರ ಭಾಷ್ಯ. ೧-೪-೩, ೧-೪-೯, ೨-೧-೧೪. | |||||||||
26 | ಅವ್ಯಾಕೃತಮ್ | ಜಗತ್ತಿನ ಬೀಜರೂಪ. ಇದು ಅವಿದ್ಯೆಯಿಂದ ಆತ್ಮನಲ್ಲಿ ಕಲ್ಪಿತವಾಗಿರುತ್ತದೆ. ಆತ್ಮನಿಗಿಂತ ಬೇರೆಯೆಂದಾಗಲಿ ಬೇರೆಯಲ್ಲವೆಂದಾಗಲಿ ಹೇಳಬರುವದಲ್ಲ. ಇದರ ಪರಿಣಾಮದಿಂದಲೇ ಬ್ರಹ್ಮಕ್ಕೆ ಪರಿಣಮಿಸುವದೆಂಬ ವ್ಯವಹಾರ ಬ್ರಹ್ಮಸೂತ್ರ ಭಾಷ್ಯ. ೨-೧-೨೭ ಇದನ್ನು ಮೂಲಾವಿದ್ಯೆಯೆಂದು ಕರೆದು ಇದೇ ಆತ್ಮಾನಾತ್ಮರ ಅಧ್ಯಾಸಕ್ಕೆ ಕಾರಣವೆಂದು ವ್ಯಾಖ್ಯಾನಕಾರರು ಬರೆದಿರುತ್ತಾರೆ; ಈ ವಾದಕ್ಕೆ ಭಾಷ್ಯದಲ್ಲಿ ಆಧಾರವಿಲ್ಲ. | |||||||||
27 | ಅಸತ್, ಅಸತ್ಯಮ್ | 1. ಯಾವದರ ವಿಷಯವಾದ ಬುದ್ಧಿಯು ಬಾಧಿತವಾಗುವದೋ ಅದು, ಹುಸಿತೋರಿಕೆ. ಇದನ್ನು ಅನೃತ, ಮಿಥ್ಯೆ, ಮೃಷಾ ಎಂದೂ ಕರೆಯುವರು. ಕಾರ್ಯಪ್ರಪಂಚವೆಲ್ಲವೂ ಅಸತ್ತು. ಭಗವದ್ಗೀತಾ ಭಾಷ್ಯ. ೨-೧೬, ತೈತ್ತಿರೀಯೋಪನಿಷತ್ ಭಾಷ್ಯ. ೨-೧. 2. ಕಾರಣವಾದ ಅವ್ಯಾಕೃತವು. ನಾಮರೂಪಗಳಿಂದ ಕೂಡಿ ಇಂಥದ್ದೆಂದು ಹೇಳುವುದಕ್ಕೆ ಬರುವ ವಸ್ತು ಸತ್ತು, ಅದಕ್ಕೆ ವಿಪರೀತವಾದದ್ದರಿಂದ ಅವ್ಯಾಕೃತವು ಅಸತ್ತು. ತೈತ್ತಿರೀಯೋಪನಿಷತ್. ೨-೭, ಭಗವದ್ಗೀತಾಭಾಷ್ಯ. ೯-೧೯. | |||||||||
28 | ಅಹಂಕಾರ | 1. ದೇಹಾದಿಗಳು ನಾನೆಂಬ ಅರಿವು. ನಾನು ಕರ್ತನೆಂಬ ಭಾವನೆಯು ಕರ್ಮಕ್ಕೆ ಕಾರಣ. ಭಗವದ್ಗೀತಾಭಾಷ್ಯ. ೧೩-೩, ೧೮-೧೭. ತತ್ತ್ವಜ್ಞಾನಿಗೆ ಸಾತ್ವಿಕವಾದ ಅಹಂಕಾರವು ಕೂಡ ಇರುವದಿಲ್ಲ. ಭಗವದ್ಗೀತಾಭಾಷ್ಯ. ೧೩-೫೩, ೧೮-೨೪. 2. ಮನಸ್ಸಿಗೆ ಕಾರಣವಾದ, ಮಹಾಭೂತಗಳಿಗೆ ಕಾರಣವಾದ ಅಹಂಕಾರ ವೆಂಬ ತತ್ತ್ವ. ಭಗವದ್ಗೀತಾಭಾಷ್ಯ. ೭-೪, ೭-೫. | |||||||||
29 | ಅಹಂಪ್ರತ್ಯಯವಿಷಯಃ, ಅಹಂಪ್ರತ್ಯಯೀ | ನಾನೆಂಬ ಪ್ರತ್ಯಯಕ್ಕೆ ಆಶ್ರಯವೂ ವಿಷಯವೂ ಆಗಿರುವ ಜೀವಾತ್ಮ. ಅಹಂಪ್ರತ್ಯಯಕ್ಕೆ ವಿಷಯನಾಗಿಯೇ ಆತ್ಮನು ಮಾನಸಪ್ರತ್ಯಕ್ಷಕ್ಕೆ ಗೋಚರವಾಗಿರುತ್ತಾನೆಂದು ಮೀಮಾಂಸಕರೂ ನೈಯಾಯಿಕರೂ ಒಪ್ಪುತ್ತಿದ್ದರು. ಅವನಿಗೂ ಸಾಕ್ಷಿಯಾಗಿರುವ ಆತ್ಮನೇ ವೇದಾಂತವೇದ್ಯನೆಂದು ಆಚಾರ್ಯರು ಅಧ್ಯಾಸಭಾಷ್ಯ, ಬೃಹದಾರಣ್ಯಕ ಸಂಬಂಧ ಭಾಷ್ಯ, ಬ್ರಹ್ಮಸೂತ್ರಭಾಷ್ಯ. ೧-೧-೪ ಮುಂತಾದ ಕಡೆಗಳಲ್ಲಿ ತಿಳಿಸಿಕೊಟ್ಟಿರುತ್ತಾರೆ. ಭಗವದ್ಗೀತಾಭಾಷ್ಯ. ೨-೧೯ರಲ್ಲಿ ಆತ್ಮನು ಅಹಂಪ್ರತ್ಯಯವಿಷಯನು ಎಂದು ತಿಳಿಯುವದೇ ಅಜ್ಞಾನವೆಂದು ಹೇಳಿದೆ. | |||||||||
30 | ಆಕಾಶಃ-೧ | ಶಬ್ದವೆಂಬ ಗುಣವುಳ್ಳ ಮಹಾಭೂತವು. ಆಕಾಶಕ್ಕೂ ವಾಯ್ವಾದಿಗಳಂತೆ ಉತ್ಪತ್ತಿಯುಂಟು ಎಂಬುದನ್ನು ಬ್ರಹ್ಮಸೂತ್ರ ಭಾಷ್ಯ. ೨-೩-೭ರಲ್ಲಿ ತೋರಿಸಿರುತ್ತದೆ. |