A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಶಾಂಕರವೇದಾಂತ ನಿಘಂಟು | ಕನ್ನಡ-ಕನ್ನಡ | ಪ್ರಕಾಶಕರು - ಅಧ್ಯಾತ್ಮ ಪ್ರಕಾಶಕಾರ್ಯಾಲಯ (2014)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
21 ಅವಾಕ್ಯಾರ್ಥಃ, ಅವಾಚ್ಯಾರ್ಥಃ ಬ್ರಹ್ಮದಲ್ಲಿ ಶಬ್ದಪ್ಪವೃತ್ತಿಗೆ ನಿಮಿತ್ತವಾದ ಜಾತಿ, ದ್ರವ್ಯ- ಮುಂತಾದ ವಿಕಲ್ಪಗಳಿಲ್ಲದ್ದರಿಂದ ಅದು ಯಾವ ಶಬ್ದಕ್ಕೂ ವಾಚ್ಯವಲ್ಲ. ಪದಾರ್ಥಗಳ ಸಂಸರ್ಗವನ್ನೇ ವಾಕ್ಯವು ತಿಳಿಸುವದರಿಂದ ಯಾವದರ ಸಂಬಂಧವೂ ಇಲ್ಲದ ಬ್ರಹ್ಮವು ವಾಕ್ಯಾರ್ಥವೂ ಅಲ್ಲ. ತೈತ್ತಿರೀಯೋಪನಿಷತ್ ಭಾಷ್ಯ. ೨-೧. "ಅಭಿಧಾನಮ್‌' ಎಂಬ ಶಬ್ದದ ವಿವರವನ್ನು ನೋಡಿ.
22 ಅವಿದ್ಯಾ ಆತ್ಮಾನಾತ್ಮರ ಅನ್ಯೋನ್ಯಾಧ್ಯಾಸವೇ ಅವಿದ್ಯೆ. ಈ ಅಧ್ಯಾಸವು ಕಾರ್ಯಾವಿದ್ಯೆಯೆಂದೂ ಇದಕ್ಕೆ ಕಾರಣವಾಗಿ ಮೂಲಾವಿದ್ಯೆ, ಮಾಯೆ- ಎಂಬ ಹೆಸರಿನ ಅವಿದ್ಯೆಯೊಂದು ಇರುವದೆಂದೂ ವ್ಯಾಖ್ಯಾನಕಾರರು ಬದೆದಿರುತ್ತಾರೆ. ಪ್ರಸ್ತಾನತ್ರಯಭಾಷ್ಯದಲ್ಲಿ ಈ ವಾದಕ್ಕೆ ಆಧಾರವು ಸಿಕ್ಕುವದಿಲ್ಲ.
23 ಅವಿದ್ಯಾಕಲ್ಪಿತ ಅವಿದ್ಯೆಯಿಂದ ತೋರುವ; ಭ್ರಾಂತಿನಿಮಿತ್ತವಾದ ಹುಸಿ ತೋರಿಕೆ. ಅವಿದ್ಯಾಕಲ್ಪಿತ, ಅವಿದ್ಯಾಕೃತ, ಅವಿದ್ಯಾತ್ಮಕ, ಅವಿದ್ಯಾನಿಮಿತ್ತ, ಅವಿದ್ಯಾ ಪ್ರತ್ಯುಪಸ್ಥಾಪಿತ, ಅವಿದ್ಯಾಧ್ಯಾರೋಪಿತ, ಅವಿದ್ಯಾಧ್ಯಸ್ತ, ಅವಿದ್ಯಾಲಕ್ಷಣ- ಈ ಎಲ್ಲಾ ಮಾತುಗಳಿಗೂ ಒಂದೇ ಅರ್ಥ. ಸೂತ್ರ ಭಾಷ್ಯದಲ್ಲಿ ಈ ಮುಂದೆ ಹೇಳುವದೆಲ್ಲವೂ ಅವಿದ್ಯಾಕಲ್ಪಿತವೆಂದು ತಿಳಿಸಿದೆ; ಉಪಾಸ್ಯೋಪಾಸಕ ಭಾವ ೧-೧-೧೨; ಆತ್ಮಬುದ್ಧಿ ಸಂಬಂಧ ೨-೩-೩೧; ಕರ್ತೃತ್ವಭೋಕ್ತತ್ವಗಳು ೨-೩. ೪೦; ಸಂಸಾರಿತ್ವ, ಜೀವತ್ವ, ಶಾರೀರತ್ವ ೧-೧-೪, ೧-೧-೧೭, ೧-೩-೧೯, ೨-೩-೪೬, ೨-೩-೫೦; ಕಾರ್ಯಕರಣಗಳು ೧-೧-೨೦; ತಪ್ಯತಾಪಕಭಾವ ೨-೨-೧೦; ನಾಮರೂಪಬೀಜ, ನಾಮರೂಪಮಾಯಾ ೧-೪-೩, ೨-೧-೧೪, ೨-೨-೨ ೪-೩-೧೪; ಜೀವಪ್ರಾಜ್ಞಭೇದ ೧-೪-೬; ನಾಮರೂಪರಚಿತದೇಹಾದ್ಯುಪಾಧಿಗಳು ೧-೪-೨೨, ೨-೩-೪೬; ಪ್ರಾಣಾದಿಕಲೆಗಳು ೪-೨-೧೬; ಬ್ರಹ್ಮದ ಉಪಾಧಿಗಳು ೨-೩-೧೫; ಬ್ರಹ್ಮದ ಕಾರ್ಯವಾದ ಪ್ರಪಂಚವೂ ಅದರ ಧರ್ಮಗಳೂ ೨-೧-೯; ಭೂತೇಂದ್ರಿಯಗಳು ೧-೪. ೨೨; ವ್ಯಾಕೃತಾವ್ಯಾಕೃತನಾಮರೂಪಗಳು ೨-೧-೨೭.
24 ಅವ್ಯಕ್ತಃ ಇಂದ್ರಿಯಗಳಿಗೆ ಗೋಚರನಲ್ಲದ ಆತ್ಮ. ಭಗವದ್ಗೀತಾ ಭಾಷ್ಯ. ೮-೨೦.
25 ಅವ್ಯಕ್ತಮ್‌ ನಾಮರೂಪಾತ್ಮಕವಾದ ಜಗತ್ತಿನ ಬೀಜವಾದ ಅವ್ಯಾಕೃತ ಅಥವಾ ಮಾಯೆ. ಇದು ಸಾಂಖ್ಯರು ಕಲ್ಪಿಸಿರುವ ಪ್ರಧಾನದಂತೆ ಸ್ವತಂತ್ರವಾಗಿ ಪರಿಣಾಮವಾಗುವದಲ್ಲ; ಅವಿದ್ಯೆಯಿಂದ ಆತ್ಮನಲ್ಲಿ ಶಕ್ತಿಯೆಂದು ಕಲ್ಪಿತವಾಗಿರುವದು. ಬ್ರಹ್ಮಸೂತ್ರ ಭಾಷ್ಯ. ೧-೪-೩, ೧-೪-೯, ೨-೧-೧೪.
26 ಅವ್ಯಾಕೃತಮ್‌ ಜಗತ್ತಿನ ಬೀಜರೂಪ. ಇದು ಅವಿದ್ಯೆಯಿಂದ ಆತ್ಮನಲ್ಲಿ ಕಲ್ಪಿತವಾಗಿರುತ್ತದೆ. ಆತ್ಮನಿಗಿಂತ ಬೇರೆಯೆಂದಾಗಲಿ ಬೇರೆಯಲ್ಲವೆಂದಾಗಲಿ ಹೇಳಬರುವದಲ್ಲ. ಇದರ ಪರಿಣಾಮದಿಂದಲೇ ಬ್ರಹ್ಮಕ್ಕೆ ಪರಿಣಮಿಸುವದೆಂಬ ವ್ಯವಹಾರ ಬ್ರಹ್ಮಸೂತ್ರ ಭಾಷ್ಯ. ೨-೧-೨೭ ಇದನ್ನು ಮೂಲಾವಿದ್ಯೆಯೆಂದು ಕರೆದು ಇದೇ ಆತ್ಮಾನಾತ್ಮರ ಅಧ್ಯಾಸಕ್ಕೆ ಕಾರಣವೆಂದು ವ್ಯಾಖ್ಯಾನಕಾರರು ಬರೆದಿರುತ್ತಾರೆ; ಈ ವಾದಕ್ಕೆ ಭಾಷ್ಯದಲ್ಲಿ ಆಧಾರವಿಲ್ಲ.
27 ಅಸತ್‌, ಅಸತ್ಯಮ್‌ 1. ಯಾವದರ ವಿಷಯವಾದ ಬುದ್ಧಿಯು ಬಾಧಿತವಾಗುವದೋ ಅದು, ಹುಸಿತೋರಿಕೆ. ಇದನ್ನು ಅನೃತ, ಮಿಥ್ಯೆ, ಮೃಷಾ ಎಂದೂ ಕರೆಯುವರು. ಕಾರ್ಯಪ್ರಪಂಚವೆಲ್ಲವೂ ಅಸತ್ತು. ಭಗವದ್ಗೀತಾ ಭಾಷ್ಯ. ೨-೧೬, ತೈತ್ತಿರೀಯೋಪನಿಷತ್ ಭಾಷ್ಯ. ೨-೧. 2. ಕಾರಣವಾದ ಅವ್ಯಾಕೃತವು. ನಾಮರೂಪಗಳಿಂದ ಕೂಡಿ ಇಂಥದ್ದೆಂದು ಹೇಳುವುದಕ್ಕೆ ಬರುವ ವಸ್ತು ಸತ್ತು, ಅದಕ್ಕೆ ವಿಪರೀತವಾದದ್ದರಿಂದ ಅವ್ಯಾಕೃತವು ಅಸತ್ತು. ತೈತ್ತಿರೀಯೋಪನಿಷತ್. ೨-೭, ಭಗವದ್ಗೀತಾಭಾಷ್ಯ. ೯-೧೯.
28 ಅಹಂಕಾರ 1. ದೇಹಾದಿಗಳು ನಾನೆಂಬ ಅರಿವು. ನಾನು ಕರ್ತನೆಂಬ ಭಾವನೆಯು ಕರ್ಮಕ್ಕೆ ಕಾರಣ. ಭಗವದ್ಗೀತಾಭಾಷ್ಯ. ೧೩-೩, ೧೮-೧೭. ತತ್ತ್ವಜ್ಞಾನಿಗೆ ಸಾತ್ವಿಕವಾದ ಅಹಂಕಾರವು ಕೂಡ ಇರುವದಿಲ್ಲ. ಭಗವದ್ಗೀತಾಭಾಷ್ಯ. ೧೩-೫೩, ೧೮-೨೪. 2. ಮನಸ್ಸಿಗೆ ಕಾರಣವಾದ, ಮಹಾಭೂತಗಳಿಗೆ ಕಾರಣವಾದ ಅಹಂಕಾರ ವೆಂಬ ತತ್ತ್ವ. ಭಗವದ್ಗೀತಾಭಾಷ್ಯ. ೭-೪, ೭-೫.
29 ಅಹಂಪ್ರತ್ಯಯವಿಷಯಃ, ಅಹಂಪ್ರತ್ಯಯೀ ನಾನೆಂಬ ಪ್ರತ್ಯಯಕ್ಕೆ ಆಶ್ರಯವೂ ವಿಷಯವೂ ಆಗಿರುವ ಜೀವಾತ್ಮ. ಅಹಂಪ್ರತ್ಯಯಕ್ಕೆ ವಿಷಯನಾಗಿಯೇ ಆತ್ಮನು ಮಾನಸಪ್ರತ್ಯಕ್ಷಕ್ಕೆ ಗೋಚರವಾಗಿರುತ್ತಾನೆಂದು ಮೀಮಾಂಸಕರೂ ನೈಯಾಯಿಕರೂ ಒಪ್ಪುತ್ತಿದ್ದರು. ಅವನಿಗೂ ಸಾಕ್ಷಿಯಾಗಿರುವ ಆತ್ಮನೇ ವೇದಾಂತವೇದ್ಯನೆಂದು ಆಚಾರ್ಯರು ಅಧ್ಯಾಸಭಾಷ್ಯ, ಬೃಹದಾರಣ್ಯಕ ಸಂಬಂಧ ಭಾಷ್ಯ, ಬ್ರಹ್ಮಸೂತ್ರಭಾಷ್ಯ. ೧-೧-೪ ಮುಂತಾದ ಕಡೆಗಳಲ್ಲಿ ತಿಳಿಸಿಕೊಟ್ಟಿರುತ್ತಾರೆ. ಭಗವದ್ಗೀತಾಭಾಷ್ಯ. ೨-೧೯ರಲ್ಲಿ ಆತ್ಮನು ಅಹಂಪ್ರತ್ಯಯವಿಷಯನು ಎಂದು ತಿಳಿಯುವದೇ ಅಜ್ಞಾನವೆಂದು ಹೇಳಿದೆ.
30 ಆಕಾಶಃ-೧ ಶಬ್ದವೆಂಬ ಗುಣವುಳ್ಳ ಮಹಾಭೂತವು. ಆಕಾಶಕ್ಕೂ ವಾಯ್ವಾದಿಗಳಂತೆ ಉತ್ಪತ್ತಿಯುಂಟು ಎಂಬುದನ್ನು ಬ್ರಹ್ಮಸೂತ್ರ ಭಾಷ್ಯ. ೨-೩-೭ರಲ್ಲಿ ತೋರಿಸಿರುತ್ತದೆ.