A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಯಕ್ಷಗಾನ ಪದಕೋಶ | ಕನ್ನಡ-ಕನ್ನಡ | ಪ್ರಕಾಶಕರು - ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂ.ಜಿ.ಎಂ. ಕಾಲೇಜು (1994)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
71 ಅರ್ಥಗಾರ ತಾಳಮದ್ದಲೆಯ ಪಾತ್ರಧಾರಿ, ಅರ್ಥಧಾರಿ ಎಂಬುದಕ್ಕೆ ಪ್ರಾದೇಶಿಕ ನಾಮಾಂತರ. ಉತ್ತರ ಕನ್ನಡತಿಟ್ಟು-ಬಡಗ ಬಡಗು
72 ಅರ್ಥಗಾರಿಕೆ / ಅರ್ಥದಾರಿಕೆ ಆಟ, ತಾಳಮದ್ದಲೆಗಳಲ್ಲಿ ಪ್ರಸಂಗದ ಪದ್ಯಗಳಿಗೆ ಅರ್ಥ ಹೇಳುವಿಕೆ, ಅರ್ಥನಿರ್ವಹಣೆ ಮತ್ತು ಅದರ ಕಲೆಗಾರಿಕೆ, ತಂತ್ರ, ವಿಧಾನ, ಅರ್ಥ ಹೇಳುವ ಕಲೆ. ಇದರ ಮೂಲಕ ಕಥೆಯ, ಪಾತ್ರದ, ಭಾವದ ನಿರ್ವಹಣೆ, ಅಭಿವ್ಯಕ್ತಿ ಆಗುತ್ತದೆ. ಪ್ರಸಂಗದ ಪದ್ಯವು ಸೂಚಿಸುವ ಸನ್ನಿವೇಶ, ಭಾವಗಳನ್ನು ವಿಸ್ತರಿಸಿ ಪ್ರತಿಭೆ, ಪಾಂಡಿತ್ಯ, ಕಲ್ಪನೆಗಳಿಂದ ಪರಿಪುಷ್ಪಗೊಳಿಸಿ ರಂಗದ ನಿಯಮಗಳಿಗೆ, ರಂಗದ ಅವಶ್ಯಕತೆ ಮತ್ತು ರಂಗ ಧರ್ಮಕ್ಕೆ ಅನುಗುಣವಾಗಿ ನಿರ್ವಹಿಸುವುದು ಅರ್ಥಗಾರಿಕೆಯ ಮುಖ್ಯ ಜೀವಾಳ, ಅರ್ಥಗಾರಿಕೆಯು, ಕಥಾಸಂದರ್ಭ, ಪಾತ್ರ ಸ್ವಭಾವ, ಸ್ಥಾನಮಾನ, ವಯಸ್ಸು, ಪಾತ್ರಜಾತಿಗಳನ್ನು ಹೊಂದಿಕೊಂಡು ಇರಬೇಕು. ಅರ್ಥದ ಗಾತ್ರ, ವೇಗ, ರೀತಿಗಳಿಗೂ ಆಟ ನಡೆಯುವ ಕಾಲ ಅಥವಾ ಜಾವ (ಮೊದಲ ಜಾವದಿಂದ ಬೆಳಗಿನ ಕಾಲದವರೆಗಿನ ಕಾಲ ವಿಭಾಗ) ಗಳನ್ನೂ ಹೊಂದಿಕೊಂಡಿರುತ್ತದೆ. ಕಾಲಪ್ರಕಾರ ಉತ್ತರೋತ್ತರವಾಗಿ ವೇಗವು ಹೆಚ್ಚು. ಅರ್ಥಗಾರಿಕೆಯು ಸಾಹಿತ್ಯ ಮತ್ತು ನಾಟಕೀಯ ಕೌಶಲದ ಎಲ್ಲ ಒಳ್ಳೆಯ ಗುಣಗಳನ್ನು ಅಪೇಕ್ಷಿಸುತ್ತದೆ. ಪರಿಣಾಮಕಾರಿಯಾದ ಕಂಠ, ಭಾವಪ್ರಜ್ಞೆ, ಪ್ರಸಂಗದ ಅನುಭವ ಭಾಷೆ, ಅಚ್ಚುಕಟ್ಟುತನಗಳು ಮುಖ್ಯ ಅಪೇಕ್ಷಣೀಯ ಗುಣಗಳು. ಪೀಠಿಕೆ ಎಂಬ ಪಾತ್ರ ಪ್ರವೇಶದ ಮಾತುಗಳು, ಪದ್ಯದ ಅರ್ಥ, ಸಂವಾದ ಇವು ಅರ್ಥಗಾರಿಕೆಯ ಮುಖ್ಯ ಹಂತಗಳು. ಎತ್ತುಗಡೆ ಅಥವಾ ಸಂದರ್ಭ ಎಂಬುದು ಸಹಕಲಾವಿದನಿಗೆ ಅಥವಾ ಹಾಡಿಗೆ ಕೊಡುವ ಸಂದರ್ಭ ಅಥವಾ ಕೊಂಡಿಯಂತಿರುವುದು. ಅರ್ಥಗಾರಿಕೆಯು ಕಾಲಕಾಲಕ್ಕೆ ಬದಲಾಗುತ್ತ ಬಂದಿದ್ದು, ಇಡಿಯ ಪದ್ಯದ ಅರ್ಥವನ್ನು ಒಮ್ಮೆಗೇ ಹೇಳಿ ಮುಗಿಸುವುದು ಹಳೆಯ ವಿಧಾನ. ಈಗ ಅಲ್ಲಲ್ಲಿ ಚಿಕ್ಕ ಪ್ರಶ್ನೆ, ಸಂವಾದಗಳ ಮೂಲಕ ಪಾತ್ರಧಾರಿಗಳು ಕೂಡಿಕೊಂಡು ಅರ್ಥ ಹೇಳುವ ಕ್ರಮ ಬಳಕೆಗೆ ಬಂದಿದೆ. ಅರ್ಥಗಾರಿಕೆಗೆ ಪ್ರಸಂಗದ ಪದ್ಯಗಳು ಮುಖ್ಯ ಆಧಾರ. ಅದರ ಕತೆ, ಪ್ರಸಂಗಕ್ಕೆ ಮೂಲವಾದ ಕಾವ್ಯ ಇವು ಎರಡನೆಯ ಆಧಾರಗಳು. ಪದ್ಯದ ಆಧಾರ ಸ್ಥೂಲವಾಗಿ ಮಾತ್ರ ಇರುತ್ತದೆ. ಅರ್ಥಗಾರಿಕೆ ಅದನ್ನು 'ಮೀರಿ' ಬೆಳೆಯುತ್ತದೆ. ಪ್ರಸಂಗಕ್ಕೆ ಹೊಂದಿಕೆಯಾಗುವಂತೆ ಪಾತ್ರಧಾರಿಯು ತನ್ನ ಇತರ ಅನುಭವಗಳನ್ನು, ಸಂಗ್ರಹ, ಕಲ್ಪನೆ, ಪ್ರೇರಣೆಗಳನ್ನು ಹೊಂದಿಸಬೇಕು. ಚಾರಕ, ಸಖಿ, ಹಾಸ್ಯಪಾತ್ರಗಳು - ಮೊದಲಾದುವುಗಳಿಗೆ ಎಷ್ಟೋ ಬಾರಿ ಪದ್ಯಗಳೇ ಇರುವುದಿಲ್ಲ. ಇಲ್ಲಿ ಸನ್ನಿವೇಶವೇ ಆಧಾರವಾಗಿರುತ್ತದೆ. ಕಿರಾತ ಪಾತ್ರಗಳಿಗೆ ಸ್ವಲ್ಪ ಮೋಡಿ (ಗ್ರಾಮ್ಯ) ಭಾಷೆಯನ್ನು ಬಳಸುವ ರೂಢಿಯಿದೆ. ಅರ್ಥಗಾರಿಕೆಯೆಂದರೆ, ಸಾಹಿತ್ಯ ವಿಮರ್ಶೆಯಂತೆ, ಕೃತಿಗೆ ನಾವು ಮಾಡುವ ಅಥವಾ ಕೊಡುವ ಅರ್ಥವೂ ಹೌದು. ಸಾಮಯಿಕ ಪ್ರೇರಣೆಗಳನ್ನೂ, ವಿಚಾರಗಳನ್ನೂ ಅದು ಒಳಗೊಳ್ಳುತ್ತದೆ. ಪ್ರಸಂಗ ಪದ್ಯಗಳು ಅರ್ಥವಾಗುವ ಪ್ರಕ್ರಿಯೆ ಸೂಕ್ಷ್ಮವೂ, ಗಹನವೂ ಆಗಿದ್ದು, ಯಕ್ಷಗಾನದ ಅರ್ಥಗಾರಿಕೆಯೆಂಬುದು ಕನ್ನಡ ಭಾಷೆಯು ಹೆಮ್ಮೆ ಪಟ್ಟುಕೊಳ್ಳಬಹುದಾದ ವಾಙ್ಮಯ ಸಿದ್ಧಿಗಳಲ್ಲೊಂದಾಗಿದೆ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
73 ಅರ್ಥದಾರಿ ತಾಳಮದ್ದಲೆಯ ಪಾತ್ರಧಾರಿ, 'ಅರ್ಥಧಾರಿ' ಎಂಬುದು 'ವೇಷಧಾರಿ' ಎಂಬುದರಿಂದ ಅಥವಾ ತುಳು 'ಅರ್ಥದಾರ್' (ಅರ್ಥದವರು) ಎಂಬುದರಿಂದ ಬಂದಿರಬಹುದು. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
74 ಅರ್ಥದಾರಿಕೆ ಆಟ, ತಾಳಮದ್ದಲೆಗಳಲ್ಲಿ ಪ್ರಸಂಗದ ಪದ್ಯಗಳಿಗೆ ಅರ್ಥ ಹೇಳುವಿಕೆ, ಅರ್ಥನಿರ್ವಹಣೆ ಮತ್ತು ಅದರ ಕಲೆಗಾರಿಕೆ, ತಂತ್ರ, ವಿಧಾನ, ಅರ್ಥ ಹೇಳುವ ಕಲೆ. ಇದರ ಮೂಲಕ ಕಥೆಯ, ಪಾತ್ರದ, ಭಾವದ ನಿರ್ವಹಣೆ, ಅಭಿವ್ಯಕ್ತಿ ಆಗುತ್ತದೆ. ಪ್ರಸಂಗದ ಪದ್ಯವು ಸೂಚಿಸುವ ಸನ್ನಿವೇಶ, ಭಾವಗಳನ್ನು ವಿಸ್ತರಿಸಿ ಪ್ರತಿಭೆ, ಪಾಂಡಿತ್ಯ, ಕಲ್ಪನೆಗಳಿಂದ ಪರಿಪುಷ್ಪಗೊಳಿಸಿ ರಂಗದ ನಿಯಮಗಳಿಗೆ, ರಂಗದ ಅವಶ್ಯಕತೆ ಮತ್ತು ರಂಗ ಧರ್ಮಕ್ಕೆ ಅನುಗುಣವಾಗಿ ನಿರ್ವಹಿಸುವುದು ಅರ್ಥಗಾರಿಕೆಯ ಮುಖ್ಯ ಜೀವಾಳ, ಅರ್ಥಗಾರಿಕೆಯು, ಕಥಾಸಂದರ್ಭ, ಪಾತ್ರ ಸ್ವಭಾವ, ಸ್ಥಾನಮಾನ, ವಯಸ್ಸು, ಪಾತ್ರಜಾತಿಗಳನ್ನು ಹೊಂದಿಕೊಂಡು ಇರಬೇಕು. ಅರ್ಥದ ಗಾತ್ರ, ವೇಗ, ರೀತಿಗಳಿಗೂ ಆಟ ನಡೆಯುವ ಕಾಲ ಅಥವಾ ಜಾವ (ಮೊದಲ ಜಾವದಿಂದ ಬೆಳಗಿನ ಕಾಲದವರೆಗಿನ ಕಾಲ ವಿಭಾಗ) ಗಳನ್ನೂ ಹೊಂದಿಕೊಂಡಿರುತ್ತದೆ. ಕಾಲಪ್ರಕಾರ ಉತ್ತರೋತ್ತರವಾಗಿ ವೇಗವು ಹೆಚ್ಚು. ಅರ್ಥಗಾರಿಕೆಯು ಸಾಹಿತ್ಯ ಮತ್ತು ನಾಟಕೀಯ ಕೌಶಲದ ಎಲ್ಲ ಒಳ್ಳೆಯ ಗುಣಗಳನ್ನು ಅಪೇಕ್ಷಿಸುತ್ತದೆ. ಪರಿಣಾಮಕಾರಿಯಾದ ಕಂಠ, ಭಾವಪ್ರಜ್ಞೆ, ಪ್ರಸಂಗದ ಅನುಭವ ಭಾಷೆ, ಅಚ್ಚುಕಟ್ಟುತನಗಳು ಮುಖ್ಯ ಅಪೇಕ್ಷಣೀಯ ಗುಣಗಳು. ಪೀಠಿಕೆ ಎಂಬ ಪಾತ್ರ ಪ್ರವೇಶದ ಮಾತುಗಳು, ಪದ್ಯದ ಅರ್ಥ, ಸಂವಾದ ಇವು ಅರ್ಥಗಾರಿಕೆಯ ಮುಖ್ಯ ಹಂತಗಳು. ಎತ್ತುಗಡೆ ಅಥವಾ ಸಂದರ್ಭ ಎಂಬುದು ಸಹಕಲಾವಿದನಿಗೆ ಅಥವಾ ಹಾಡಿಗೆ ಕೊಡುವ ಸಂದರ್ಭ ಅಥವಾ ಕೊಂಡಿಯಂತಿರುವುದು. ಅರ್ಥಗಾರಿಕೆಯು ಕಾಲಕಾಲಕ್ಕೆ ಬದಲಾಗುತ್ತ ಬಂದಿದ್ದು, ಇಡಿಯ ಪದ್ಯದ ಅರ್ಥವನ್ನು ಒಮ್ಮೆಗೇ ಹೇಳಿ ಮುಗಿಸುವುದು ಹಳೆಯ ವಿಧಾನ. ಈಗ ಅಲ್ಲಲ್ಲಿ ಚಿಕ್ಕ ಪ್ರಶ್ನೆ, ಸಂವಾದಗಳ ಮೂಲಕ ಪಾತ್ರಧಾರಿಗಳು ಕೂಡಿಕೊಂಡು ಅರ್ಥ ಹೇಳುವ ಕ್ರಮ ಬಳಕೆಗೆ ಬಂದಿದೆ. ಅರ್ಥಗಾರಿಕೆಗೆ ಪ್ರಸಂಗದ ಪದ್ಯಗಳು ಮುಖ್ಯ ಆಧಾರ. ಅದರ ಕತೆ, ಪ್ರಸಂಗಕ್ಕೆ ಮೂಲವಾದ ಕಾವ್ಯ ಇವು ಎರಡನೆಯ ಆಧಾರಗಳು. ಪದ್ಯದ ಆಧಾರ ಸ್ಥೂಲವಾಗಿ ಮಾತ್ರ ಇರುತ್ತದೆ. ಅರ್ಥಗಾರಿಕೆ ಅದನ್ನು 'ಮೀರಿ' ಬೆಳೆಯುತ್ತದೆ. ಪ್ರಸಂಗಕ್ಕೆ ಹೊಂದಿಕೆಯಾಗುವಂತೆ ಪಾತ್ರಧಾರಿಯು ತನ್ನ ಇತರ ಅನುಭವಗಳನ್ನು, ಸಂಗ್ರಹ, ಕಲ್ಪನೆ, ಪ್ರೇರಣೆಗಳನ್ನು ಹೊಂದಿಸಬೇಕು. ಚಾರಕ, ಸಖಿ, ಹಾಸ್ಯಪಾತ್ರಗಳು - ಮೊದಲಾದುವುಗಳಿಗೆ ಎಷ್ಟೋ ಬಾರಿ ಪದ್ಯಗಳೇ ಇರುವುದಿಲ್ಲ. ಇಲ್ಲಿ ಸನ್ನಿವೇಶವೇ ಆಧಾರವಾಗಿರುತ್ತದೆ. ಕಿರಾತ ಪಾತ್ರಗಳಿಗೆ ಸ್ವಲ್ಪ ಮೋಡಿ (ಗ್ರಾಮ್ಯ) ಭಾಷೆಯನ್ನು ಬಳಸುವ ರೂಢಿಯಿದೆ. ಅರ್ಥಗಾರಿಕೆಯೆಂದರೆ, ಸಾಹಿತ್ಯ ವಿಮರ್ಶೆಯಂತೆ, ಕೃತಿಗೆ ನಾವು ಮಾಡುವ ಅಥವಾ ಕೊಡುವ ಅರ್ಥವೂ ಹೌದು. ಸಾಮಯಿಕ ಪ್ರೇರಣೆಗಳನ್ನೂ, ವಿಚಾರಗಳನ್ನೂ ಅದು ಒಳಗೊಳ್ಳುತ್ತದೆ. ಪ್ರಸಂಗ ಪದ್ಯಗಳು ಅರ್ಥವಾಗುವ ಪ್ರಕ್ರಿಯೆ ಸೂಕ್ಷ್ಮವೂ, ಗಹನವೂ ಆಗಿದ್ದು, ಯಕ್ಷಗಾನದ ಅರ್ಥಗಾರಿಕೆಯೆಂಬುದು ಕನ್ನಡ ಭಾಷೆಯು ಹೆಮ್ಮೆ ಪಟ್ಟುಕೊಳ್ಳಬಹುದಾದ ವಾಙ್ಮಯ ಸಿದ್ಧಿಗಳಲ್ಲೊಂದಾಗಿದೆ. ಅರ್ಥಗಾರಿಕೆ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
75 ಅರ್ಥ ಮಾತಾಡುವುದು ತಾಳಮದ್ದಲೆಯ ಪಾತ್ರವಾಗಿ ಮಾತಾಡುವಿಕೆ. ತಾನೇ ಸ್ವತಃ ಪಾತ್ರವಾಗಿ ಮಾತಾಡುವುದರಿಂದ ಅರ್ಥ ಮಾತಾಡುವುದು ಎಂಬುದಕ್ಕೆ ಔಚಿತ್ಯ, ಅರ್ಥ ಹೇಳುವುದು ಎಂಬ ಪ್ರಯೋಗವು ಸಹ ಇದ್ದರೂ, ಇದೇ ಹೆಚ್ಚು ಉಚಿತ. ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
76 ಅರ್ಥ ಹೇಳುವುದು ಆಟ, ತಾಳಮದ್ದಲೆಗಳಲ್ಲಿ ಪ್ರಸಂಗದ ಪದ್ಯಗಳಿಗೆ ಅರ್ಥ ಹೇಳುವಿಕೆ, ಅರ್ಥನಿರ್ವಹಣೆ ಮತ್ತು ಅದರ ಕಲೆಗಾರಿಕೆ, ತಂತ್ರ, ವಿಧಾನ, ಅರ್ಥ ಹೇಳುವ ಕಲೆ. ಇದರ ಮೂಲಕ ಕಥೆಯ, ಪಾತ್ರದ, ಭಾವದ ನಿರ್ವಹಣೆ, ಅಭಿವ್ಯಕ್ತಿ ಆಗುತ್ತದೆ. ಪ್ರಸಂಗದ ಪದ್ಯವು ಸೂಚಿಸುವ ಸನ್ನಿವೇಶ, ಭಾವಗಳನ್ನು ವಿಸ್ತರಿಸಿ ಪ್ರತಿಭೆ, ಪಾಂಡಿತ್ಯ, ಕಲ್ಪನೆಗಳಿಂದ ಪರಿಪುಷ್ಪಗೊಳಿಸಿ ರಂಗದ ನಿಯಮಗಳಿಗೆ, ರಂಗದ ಅವಶ್ಯಕತೆ ಮತ್ತು ರಂಗ ಧರ್ಮಕ್ಕೆ ಅನುಗುಣವಾಗಿ ನಿರ್ವಹಿಸುವುದು ಅರ್ಥಗಾರಿಕೆಯ ಮುಖ್ಯ ಜೀವಾಳ, ಅರ್ಥಗಾರಿಕೆಯು, ಕಥಾಸಂದರ್ಭ, ಪಾತ್ರ ಸ್ವಭಾವ, ಸ್ಥಾನಮಾನ, ವಯಸ್ಸು, ಪಾತ್ರಜಾತಿಗಳನ್ನು ಹೊಂದಿಕೊಂಡು ಇರಬೇಕು. ಅರ್ಥದ ಗಾತ್ರ, ವೇಗ, ರೀತಿಗಳಿಗೂ ಆಟ ನಡೆಯುವ ಕಾಲ ಅಥವಾ ಜಾವ (ಮೊದಲ ಜಾವದಿಂದ ಬೆಳಗಿನ ಕಾಲದವರೆಗಿನ ಕಾಲ ವಿಭಾಗ) ಗಳನ್ನೂ ಹೊಂದಿಕೊಂಡಿರುತ್ತದೆ. ಕಾಲಪ್ರಕಾರ ಉತ್ತರೋತ್ತರವಾಗಿ ವೇಗವು ಹೆಚ್ಚು. ಅರ್ಥಗಾರಿಕೆಯು ಸಾಹಿತ್ಯ ಮತ್ತು ನಾಟಕೀಯ ಕೌಶಲದ ಎಲ್ಲ ಒಳ್ಳೆಯ ಗುಣಗಳನ್ನು ಅಪೇಕ್ಷಿಸುತ್ತದೆ. ಪರಿಣಾಮಕಾರಿಯಾದ ಕಂಠ, ಭಾವಪ್ರಜ್ಞೆ, ಪ್ರಸಂಗದ ಅನುಭವ ಭಾಷೆ, ಅಚ್ಚುಕಟ್ಟುತನಗಳು ಮುಖ್ಯ ಅಪೇಕ್ಷಣೀಯ ಗುಣಗಳು. ಪೀಠಿಕೆ ಎಂಬ ಪಾತ್ರ ಪ್ರವೇಶದ ಮಾತುಗಳು, ಪದ್ಯದ ಅರ್ಥ, ಸಂವಾದ ಇವು ಅರ್ಥಗಾರಿಕೆಯ ಮುಖ್ಯ ಹಂತಗಳು. ಎತ್ತುಗಡೆ ಅಥವಾ ಸಂದರ್ಭ ಎಂಬುದು ಸಹಕಲಾವಿದನಿಗೆ ಅಥವಾ ಹಾಡಿಗೆ ಕೊಡುವ ಸಂದರ್ಭ ಅಥವಾ ಕೊಂಡಿಯಂತಿರುವುದು. ಅರ್ಥಗಾರಿಕೆಯು ಕಾಲಕಾಲಕ್ಕೆ ಬದಲಾಗುತ್ತ ಬಂದಿದ್ದು, ಇಡಿಯ ಪದ್ಯದ ಅರ್ಥವನ್ನು ಒಮ್ಮೆಗೇ ಹೇಳಿ ಮುಗಿಸುವುದು ಹಳೆಯ ವಿಧಾನ. ಈಗ ಅಲ್ಲಲ್ಲಿ ಚಿಕ್ಕ ಪ್ರಶ್ನೆ, ಸಂವಾದಗಳ ಮೂಲಕ ಪಾತ್ರಧಾರಿಗಳು ಕೂಡಿಕೊಂಡು ಅರ್ಥ ಹೇಳುವ ಕ್ರಮ ಬಳಕೆಗೆ ಬಂದಿದೆ. ಅರ್ಥಗಾರಿಕೆಗೆ ಪ್ರಸಂಗದ ಪದ್ಯಗಳು ಮುಖ್ಯ ಆಧಾರ. ಅದರ ಕತೆ, ಪ್ರಸಂಗಕ್ಕೆ ಮೂಲವಾದ ಕಾವ್ಯ ಇವು ಎರಡನೆಯ ಆಧಾರಗಳು. ಪದ್ಯದ ಆಧಾರ ಸ್ಥೂಲವಾಗಿ ಮಾತ್ರ ಇರುತ್ತದೆ. ಅರ್ಥಗಾರಿಕೆ ಅದನ್ನು 'ಮೀರಿ' ಬೆಳೆಯುತ್ತದೆ. ಪ್ರಸಂಗಕ್ಕೆ ಹೊಂದಿಕೆಯಾಗುವಂತೆ ಪಾತ್ರಧಾರಿಯು ತನ್ನ ಇತರ ಅನುಭವಗಳನ್ನು, ಸಂಗ್ರಹ, ಕಲ್ಪನೆ, ಪ್ರೇರಣೆಗಳನ್ನು ಹೊಂದಿಸಬೇಕು. ಚಾರಕ, ಸಖಿ, ಹಾಸ್ಯಪಾತ್ರಗಳು - ಮೊದಲಾದುವುಗಳಿಗೆ ಎಷ್ಟೋ ಬಾರಿ ಪದ್ಯಗಳೇ ಇರುವುದಿಲ್ಲ. ಇಲ್ಲಿ ಸನ್ನಿವೇಶವೇ ಆಧಾರವಾಗಿರುತ್ತದೆ. ಕಿರಾತ ಪಾತ್ರಗಳಿಗೆ ಸ್ವಲ್ಪ ಮೋಡಿ (ಗ್ರಾಮ್ಯ) ಭಾಷೆಯನ್ನು ಬಳಸುವ ರೂಢಿಯಿದೆ. ಅರ್ಥಗಾರಿಕೆಯೆಂದರೆ, ಸಾಹಿತ್ಯ ವಿಮರ್ಶೆಯಂತೆ, ಕೃತಿಗೆ ನಾವು ಮಾಡುವ ಅಥವಾ ಕೊಡುವ ಅರ್ಥವೂ ಹೌದು. ಸಾಮಯಿಕ ಪ್ರೇರಣೆಗಳನ್ನೂ, ವಿಚಾರಗಳನ್ನೂ ಅದು ಒಳಗೊಳ್ಳುತ್ತದೆ. ಪ್ರಸಂಗ ಪದ್ಯಗಳು ಅರ್ಥವಾಗುವ ಪ್ರಕ್ರಿಯೆ ಸೂಕ್ಷ್ಮವೂ, ಗಹನವೂ ಆಗಿದ್ದು, ಯಕ್ಷಗಾನದ ಅರ್ಥಗಾರಿಕೆಯೆಂಬುದು ಕನ್ನಡ ಭಾಷೆಯು ಹೆಮ್ಮೆ ಪಟ್ಟುಕೊಳ್ಳಬಹುದಾದ ವಾಙ್ಮಯ ಸಿದ್ಧಿಗಳಲ್ಲೊಂದಾಗಿದೆ. ಅರ್ಥಗಾರಿಕೆ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
77 ಅರ್ಧಕಳ್ಪು ಅರ್ಧ ಕಡಿತ, ಕಲಾವಿದ ಅಥವಾ ಸಿಬ್ಬಂದಿಯ ಸಂಬಳದಲ್ಲಿ, ತಪ್ಪಿಗಾಗಿ ವಿಧಿಸಲಾಗುವ ಕಡಿತದ ಒಂದು ಬಗೆ. ಚಿಕ್ಕ ತಪ್ಪುಗಳಿಗೆ ಅರ್ಧಕಳ್ಪು. ಒಬ್ಬ ವೇಷಧಾರಿಯು ಮಾಡಬೇಕಾದ ಎರಡು ವೇಷಗಳಲ್ಲಿ ಒಂದನ್ನು ಮಾತ್ರ ಮಾಡಿದರೆ ಅರ್ಧಕಳ್ಪು, ಬಣ್ಣಗಾರಿಕೆಯಲ್ಲಿ ರಂಗದ ಕೆಲಸದಲ್ಲಿ ತಪ್ಪಿದರೂ ಚಿಕ್ಕ ಪ್ರಮಾಣದ ಕಳ್ಪು ವಿಧಿಸಬಹುದು. ಕಳೆಯುವುದು, ಕಳ್ಪು, ತುಷ್ಟಿ, ಉಳಿ ತೆಂಕುತಿಟ್ಟು / ಬಡಗುತಿಟ್ಟು
78 ಅರ್ಧಗುಂಪು ಮದ್ದಲೆಯಲ್ಲಿ ಬಾರಿಸುವ ಒಂದು ನಾದ ವಿಶೇಷ. ಗುಂಪು ಎಂಬ ನಾದದ ಚಿಕ್ಕರೂಪ. 'ತೋಂ' ಕಾರದ ಸಣ್ಣರೂಪ. ಗುಂಪು ಬಡಗುತಿಟ್ಟು
79 ಅರ್ಧಚಂದ್ರಾಕೃತಿನಾಮ 1. ಬಣ್ಣದ ವೇಷಗಳ ಹಣೆಯಲ್ಲಿ ಬರೆಯುವ ಅರ್ಧಚಂದ್ರಾಕೃತಿಯ ನಾಮ. 2. ವೇಷಗಳ ಹಣೆಯಲ್ಲಿ ಬಿಳಿ ಅಥವಾ ಕೆಂಪು ಬಣ್ಣದಲ್ಲಿ ಬರೆಯುವ ಅರ್ಧಚಂದ್ರಾಕೃತಿ ನಾಮ. ಉದಾ : ದ್ರೋಣನ ಅಡ್ಡನಾಮ 3. ಸ್ತ್ರೀವೇಷದ ಅಡ್ಡ ಕುಂಕುಮ ನಾಮ. ಗೀರುಗಂಧದ ಚುಟ್ಟಿ ಸಮಗ್ರ ಯಕ್ಷಗಾನ ರಂಗ ಅಥವಾ ಕರಾವಳಿಯ ಎಲ್ಲ ತಿಟ್ಟುಗಳಿಗೆ ಅನ್ವಯ
80 ಅರ್ಧಚಂದ್ರಾಕೃತಿ ಬಣ್ಣ ಬಣ್ಣದ ವೇಷಗಳಲ್ಲಿ ಮುಖವರ್ಣಿಕೆಗನುಗುಣವಾಗಿ ಮಾಡಿದ ಒಂದು ವಿಭಾಗ. (ಏಣಿಬಣ್ಣ, ಕತ್ತಿಬಣ್ಣ, ಕತ್ತಿ ಬಣ್ಣ, ಚೇಳುಬಣ್ಣ, ಸುಳಿ ಬಣ್ಣ ಇತರ ವಿಭಾಗಗಳು) ಹಣೆಯಲ್ಲಿ ಅರ್ಧಚಂದ್ರಾಕೃತಿ ಬಣ್ಣಗಾರಿಕೆಗಳಿರುತ್ತವೆ. ಬಲಿ, ತಾರಕಾಸುರ, ಶುಂಭ - ಇವು ಅರ್ಧಚಂದ್ರಾಕೃತಿ ಬಣ್ಣಗಳು. ತೆಂಕುತಿಟ್ಟು